ಹೋರಾಡಿ
ಗಿರಿಧರ್, ಎಸ್. (2021) ಹೋರಾಡಿ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 28-33. ISBN 978-93-89308-81-5
Fulltext Document
ಹೋರಾಡಿ.pdf - Published Version Download (99kB) |
Introduction
ಕೆಲವೊಮ್ಮೆ ಒಳ್ಳೆಯ ಶಿಕ್ಷಕರಾಗಲು ಬರೀ ಒಳ್ಳೆಯ ತರಬೇತಿ, ಸದುದ್ದೇಶ ಮತ್ತು ಪ್ರಾಮಾಣಿಕತೆಯಷ್ಟೇ ಅಲ್ಲ ಎದೆಗಾರಿಕೆಯೂ ಬೇಕಾಗುತ್ತದೆ. ಉತ್ತರಾಖಂಡದ ಪಂತ್ ನಗರದ ಕೈಗಾರಿಕಾ ಕೇಂದ್ರವಾದ ರುದ್ರಪುರದ ಸರ್ಕಾರೀ ಪ್ರಾಥಮಿಕ ಶಾಲೆಯ ದಿಟ್ಟ ಶಿಕ್ಷಕರ ಬಗ್ಗೆ ಈ ಲೇಖನ ಪರಿಚಯಿಸುತ್ತದೆ. ಸಮಾಜವಿರೋಧೀ ಕೃತ್ಯಗಳೇ ಹೆಚ್ಚಾದ, ಅಂಥ ಕೆಲಸಗಳಿಗೆ ಮಕ್ಕಳನ್ನೇ ಬಳಸಿಕೊಳ್ಳುತ್ತಿದ್ದ ರುದ್ರಪುರದಲ್ಲಿ, ದುಷ್ಕರ್ಮಿಗಳ ಬೆದರಿಕೆಗಳಿಗೆ ಕೂಡ ಸೊಪ್ಪು ಹಾಕದೇ, ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಿ ಅವರನ್ನು ನೈಜ ಕಾಳಜಿಯಿಂದ ಶಿಕ್ಷಿತರನ್ನಾಗಿಸುತ್ತಿರುವ ಕೃಷ್ಣಕುಮಾರ್ ಶರ್ಮಾ ಮತ್ತು ಕೀರ್ತಿ ನಿಧಿ ಶರ್ಮ ಅವರ ಅಸಾಧಾರಣ ಪ್ರಯತ್ನಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ಅವರು ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬರುವಂತೆ ಮಾಡಿ, ಶಿಕ್ಷಕರ ಸಂಘವನ್ನು ಸ್ಥಾಪಿಸಿ, ಶಿಕ್ಷಣಕ್ಕೆ ಸಂಬಂಧಿಸಿದ ನಾನಾ ಚಟುವಟಿಕೆಗಳನ್ನು ಹಮ್ಮಿಕೊಂಡು ತಮ್ಮ ಕ್ಷೇತ್ರವನ್ನು ಮೀರಿದ ಸಾಧನೆ ತೋರುತ್ತಿರುವ ಬಗ್ಗೆ ವಿವರಿಸಲಾಗಿದೆ.
Item Type: | Book Section |
---|---|
Discipline: | Teachers - Education Education |
Programme: | Foundation Publications > Field Reports |
Publisher: | Navakarnataka Publications Private Limited |
Title of Book(English): | Ordinary people, extraordinary teachers-The heroes of Real India |
URI: | http://anuvadasampada.azimpremjiuniversity.edu.in/id/eprint/3302 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.